ದಾಂಪತ್ಯ

ಹರಿದ ಸಂಜೆಯ ಗುಂಗು
ಪರಿಮಳಕ್ಕೆ ಅರಳಿದ ಹೂ
ಸುಳಿಸುಳಿದ ಬಯಲ ಬೆಟ್ಟಗಾಳಿ
ನಾನಿನ್ನ ನೋಟದೊಳಗೆ ಇಳಿದು
ನೀಲ ಬಾನಲಿ ಕಾಮನಬಿಲ್ಲು.

ಅತ್ತ ಕಂದನ ಮೃದು ಕೆನ್ನೆಯಲಿ
ಇಳಿದ ಹನಿಬಿಂದು ಎದೆಯ ಹಾಲು
ನಿನ್ನುಸಿರು ತಾಗಿದ ನವಜೀವ
ನಗುತ ಪ್ರೇಮದೌತಣ ಉಂಡು
ಘನವಾಗಿ ಇಳಿದ ರಮ್ಯ ಚೇತನ.

ಚಿತ್ರ ವಿಚಿತ್ರ ಲೋಕ ಸಂಸಾರದಲಿ
ತೇಲಿದ ಗಾಳಿಪಟ ಹರಿದ ನದಿ
ದಟ್ಟಕಾಡು ದಾಟಿ ಬಯಲು ಹಸಿರು
ತಂಗಾಳಿಯ ಒರೆತ ಅಂಗಳದ
ರಂಗೋಲಿ ಚಿಕ್ಕಿ ನಕ್ಷತ್ರಗಳ ಸಂಧ್ಯೆ.

ಎಲ್ಲಾ ಪುಟಗಳಲಿ ನಾನು ನೀನು
ಬರದ ಮಹಾ ಖಂಡ ಕಾವ್ಯ
ಇಲ್ಲ ಹೌದು ಎಂಬ ಅಹಂಕಾರ
ಭಾಷೆ ಒದ್ದೆಯ ಕಣ್ಣಿವೆಗಳು
ಎದೆಯ ತುಂಬ ಮೀಟಿದ ನಾಲ್ಕು ತಂತಿ.

ಬೆಳದಿಂಗಳ ಕೆನೆಮೊಸರ ಅನ್ನ
ಪ್ರತಿ ರಾತ್ರಿ ನೆರಳು ಕರಳು ಆಟ
ಅದು ಕಳ್ಳುಬಳ್ಳಿ ದುಮ್ಮಾನ ಓಟ
ಉಳಿಯುವ ನೋಟದಲಿ ನನ್ನನಿನ್ನ
ಗರಿಕೆ ಬೇರು ಬೆಸೆದ ಸಂಬಂದ ಅನುಬಂಧ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೆಳೆತ
Next post ಗಾಜಿನ ಹೃದಯ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys